ವಾಮನ್ ರಾಜ್
ಮಂಗಳೂರಿನ ’ಬಂಗಾರ ಪಟ್ಲೇರ್' ಯೆಂದೇ ಹೆಸರುಮಾಡಿರುವ ರಂಗಭೂಮಿ ಕಲಾವಿದ, ವಾಮನ್ ರಾಜ್ ರವರು, 'ಕೋಟಿ ಚೆನ್ನಯ್ಯ'ಎಂಬ ತುಳು ಚಲನ ಚಿತ್ರದಲ್ಲಿ ಚೆನ್ನಯ್ಯನ ಪಾತ್ರ ಅಭಿನಯಿಸಿ, ಅಸಂಖ್ಯಾತ ತುಳು ಕನ್ನಡಿಗರ ಮನೆಮನೆಯಲ್ಲಿ ಪ್ರಸಿದ್ಧರಾಗಿದ್ದಾರೆ.
ಜನನ ಬಾಲ್ಯ,ಮತ್ತು ವೃತ್ತಿ
[ಬದಲಾಯಿಸಿ]ಮೂಲತಃ ಮಂಗಳೂರಿನ 'ಬಿಕರ್ನಕಟ್ಟೆ'ಯಲ್ಲಿ ಜನಿಸಿದ 'ವಾಮನ್ ರಾಜ್', ಚಲನಚಿತ್ರ ವಲಯದಲ್ಲಿ, 'ಮಾರಿ ಬಲೆ', 'ಬಂಗಾರ್ ಪಟ್ಲೇರ್' ನ 'ಪಟ್ಲೇರ್' ಪಾತ್ರದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದರು. ಕನ್ನಡದ 'ಮದರ್','ಕುದುರೆಮುಖ', ಮೊದಲಾದ ಚಿತ್ರಗಳಲ್ಲಿ ಪ್ರಮುಖ ಭೂಮಿಕೆಯಲ್ಲಿದ್ದರು. ತುಳು ಧಾರಾವಾಹಿ ’ಗುಡ್ಡೆದ ಭೂತ’ದಲ್ಲಿ ಪಾತ್ರವಹಿಸಿದ್ದಾರೆ. ಮರಾಠಿ ಭಾಷೆಯ ಕೆಲವಾರು ಚಲನಚಿತ್ರಗಳಲ್ಲೂ ಅಭಿನಯ ನೀಡಿದ್ದಾರೆ.
ರಂಗಭೂಮಿಯಲ್ಲಿನ ಕೊಡುಗೆ
[ಬದಲಾಯಿಸಿ]ಸಾವಿರಕ್ಕೂ ಅಧಿಕ ತುಳು, ಕನ್ನಡ, ಹಿಂದಿ, ಮರಾಠಿ,ನಾಟಕಗಳಲ್ಲಿ ಅಭಿನಯಿಸಿ ರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂಬೈನಗರದ ಸುಮಾರು ನಾಟಕ ನಿರ್ದೇಶಕರ ಬಳಿ ಅಬಿನಯಿಸಿ ಅವರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ.
ಪ್ರಶಸ್ತಿ,ಪಾರಿತೋಷಕಗಳು
[ಬದಲಾಯಿಸಿ]- ಸನ್, ೨೦೦೩ ರಲ್ಲಿ, 'ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ'ಯ ಪ್ರಶಸ್ತಿ.
- ಹಲವಾರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳು.
ಮರಣ
[ಬದಲಾಯಿಸಿ]೭೨ ವರ್ಷ ಪ್ರಾಯದ,'ವಾಮನ್ ರಾಜ್', ಸನ್ ೨೦೧೧ ರ, ಮೇ ೨ ರಂದು ಮುಂಬೈನ ಉಪನಗರ ಅಂಧೇರಿಯಲ್ಲಿ ನಿಧನರಾಗಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.