ಪುರಂದರದಾಸ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಲೇಖನ ಕನ್ನಡ ಚಲನಚಿತ್ರ ಪುರಂದರದಾಸ ಬಗ್ಗೆ.
ಹರಿಭಕ್ತ, ದಾಸಸಾಹಿತ್ಯದ ಪುರಂದರದಾಸರ ಬಗ್ಗೆ ಮಾಹಿತಿಗೆ ಈ ಲೇಖನವನ್ನು('ಪುರಂದರದಾಸರು') ಓದಿ.

ಪುರಂದರದಾಸ (ಚಲನಚಿತ್ರ)
ಪುರಂದರದಾಸ
ನಿರ್ದೇಶನಬಿ.ಚವಾನ್
ನಿರ್ಮಾಪಕನಂಜಪ್ಪ
ಪಾತ್ರವರ್ಗಜಿ.ಕೃಷ್ಣಸ್ವಾಮಿ ಅಯ್ಯಂಗಾರ್ ತ್ರಿಪುರಾಂಭ ಜೆ.ಟಿ.ಬಾಲಕೃಷ್ಣರಾವ್
ಸಂಗೀತಬೆಳ್ಳಾವೆ ನರಹರಿಶಾಸ್ತ್ರಿ
ಛಾಯಾಗ್ರಹಣ(ಸ್ಟೂಡಿಯೊ)
ಬಿಡುಗಡೆಯಾಗಿದ್ದು೧೯೩೭
ಚಿತ್ರ ನಿರ್ಮಾಣ ಸಂಸ್ಥೆದೇವಿ ಫಿಲಂಸ್

ಪುರಂದರದಾಸ - ೧೯೩೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ನಂಜಪ್ಪ ಚೆಟ್ಟಿಯಾರ್ ನಿರ್ಮಿಸಿದ್ದ, ಬಿ. ಚೌಹಾಣ್ ರವರ ನಿರ್ದೇಶನದ ಈ ಚಿತ್ರದಲ್ಲಿ ಜಿ. ಕೃಷ್ಣಸ್ವಾಮಿ ಅಯ್ಯಂಗಾರ್, ತ್ರಿಪುರಾಂಬ ಮತ್ತು ಜೆ. ಟಿ. ಬಾಲಕೃಷ್ಣರಾವ್ ರವರು ನಟಿಸಿದ್ದರು. ಚಿತ್ರ ಬೆಳ್ಳಾವೆ ನರಹರಿ ಶಾಸ್ತ್ರಿಯವರ ಸಂಗೀತವನ್ನು ಹೊಂದಿತ್ತು.

ಕಥಾ ಸಾರಾಂಶ

[ಬದಲಾಯಿಸಿ]

ನವಕೋಟಿ ನಾರಾಯಣನಾಗಿ, ಜಿಪುಣನಾಗಿದ್ದ ಶ್ರೀನಿವಾಸ ನಾಯಕನಿಗೆ ದೈವ ಪ್ರೇರಣೆಯಾಗಿ ಸಕಲವನ್ನು ದಾನ ಮಾಡಿ, ಭಗವನ್ನಾಮ ಸ್ಮರಣೆಯಲ್ಲಿ ತೊಡಗಿ ಪುರಂದರದಾಸ ಎಂದು ಹೆಸರು ಪಡೆಯುವ ಪ್ರಚಲಿತ ಕತೆ ಈ ಚಲನಚಿತ್ರದ ಕಥಾ ಹಂದರ ಒಳಗೊಂಡಿದೆ.

ನಿರ್ಮಾಣ ಮತ್ತು ಬಿಡುಗಡೆ

[ಬದಲಾಯಿಸಿ]

ದೇವಿ ಫಿಲಂಸ್‌ ಲಾಂಛನದಲ್ಲಿ ತಯಾರಾದ "ಪುರಂದರ ದಾಸ" ಚಿತ್ರ, ೧೬೨ ನಿಮಿಷಗಳಷ್ಟು ಅವಧಿಯದಾಗಿತ್ತು. ೧೪,೨೦೦ ಅಡಿ ಉದ್ದವಿದ್ದ ಈ ಚಲನಚಿತ್ರ ಮೈಸೂರು ಸೆಲೆಕ್ಟ್‌ ಟಾಕೀಸ್‌ ಅವರಿಗಾಗಿ, ೧೩ ಅಕ್ಟೋಬರ್‌, ೧೯೩೭ರಂದು ಸೆನ್ಸಾರ್‌ ಆಯಿತು.

ಹಾಡುಗಳು

[ಬದಲಾಯಿಸಿ]
  • ಅತಿ ಮುಡಿಲಲ್ಲ್ಲಿ
  • ಬಿರಿದ ಹೂಗಳು
  • ಶಾಂತಿಯೆ ಜೀವನ
  • ಸುಮ ಮಾಲೆ
  • ಕಾಮನು ಕಾಡುವ